"94 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆ. ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ "
"94 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪಟ್ಟಿ ಬಿಡುಗಡೆ. ಭಾರತದ ಸಾಕ್ಷ್ಯಚಿತ್ರ ನಾಮನಿರ್ದೇಶನ " ಬೆಂಗಳೂರು :- ಸಿನಿ ಜಗತ್ತು ಕಾಯುವ ವಿಶ್ವದ ದುಬಾರಿ ಮತ್ತು ಪ್ರತಿಷ್ಠೆಯ (ಅಕಾಡೆಮಿ ಅವಾರ್ಡ್ಸ್) ಪ್ರಶಸ್ತಿ ಎಂದರೆ ಅದು ಆಸ್ಕರ್ ಪ್ರಶಸ್ತಿ. ಇಂಥ ಪ್ರಶಸ್ತಿಯನ್ನು ಜಗತ್ತಿನ ಪ್ರತಿಯೊಬ್ಬ ಸಿನಿಮಾದವನು ಪಡೆಯಬೇಕು ಎಂಬುದು ದೊಡ್ಡ ಕನಸಾಗಿರುತ್ತೆ. ಆದರೆ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಈಗ 94ನೇ ಅಕಾಡೆಮಿ ಅವಾರ್ಡ್ಸ್ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗಿತ್ತು. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗಿದೆ. ಆ ಸಿನಿಮಾನೆ ತಮಿಳಿನ ‘ಕೂಳಾಂಗಲ್’ . ಈ ಸಿನಿಮಾ ಭಾರತವನ್ನು ಪ್ರತಿನಿಧಿಸಿತ್ತು. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’ ‘ಕೂಜಂಗಲ್’, ವಿಕ್ಕಿ ಕೌಶಲ್ ನಟನೆಯ ‘ಉದ್ಧಮ್’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳು ರೇಸ್ನಲ್ಲಿದ್ದವು. ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಿ, ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್. ಕರಣ್ ಅಂತಿಮವಾಗಿ ಆಸ್ಕರ್ ಕಣದಲ್ಲಿ ಸ್ಪರ್ಧಿಸಲು ‘ಕೂಳಾಂಗಲ್’ ಚಿತ್ರವನ್ನು ಜಯಿಸುತ್ತು. ಈ ಸಿನ...